ದಿನಾಂಕ 27/02/2018 ರಂದು ಉಳ್ಳಾಲ ಸಮೀಪ ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ ಎಸ್.ಎಸ್.ಎಲ್.ವಿದ್ಯಾರ್ಥಿಗಳಿಗೆ ಒಂದು ದಿನದ ಗಣಿತ ತರಬೇತಿ ಕಾರ್ಯಗಾರ ನಡೆಸಲಾಯಿತು. ಸುಮಾರು 1000 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್ ರವಿ ಹಾಗೂ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ವೈ ಶಿವರಾಮಯ್ಯ ಭಾಗವಹಿಸಿದ್ದರು. ಶ್ರೀ ಶಾಹುಲ್ ಹಮೀದ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ದ.ಕ.ಜಿಲ್ಲಾ ಪಮಚಾಯತ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ...
Inspiring words
Wednesday, 28 February 2018
Monday, 19 February 2018
744 hours reamaining to SSLC Examination....

ಇಂದು(19/2/2017) ಡಾ| ಅಂಬೇಡ್ಕರ್ ಭವನ ಕುಕ್ಕೇಡಿ, ಬೆಳ್ತಂಗಡಿ ತಾಲೂಕು ಇಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನ ವಿಷಯಕ್ಕೆ ಯೋಗೀಶ್, ಸ.ಪ್ರೌ.ಶಾಲೆ ಗುರುವಾಯನ ಕೆರೆ ಹಾಗೂ ಇಂಗ್ಲೀಷ್ ವಿಷಯಕ್ಕೆ ಶ್ರೀ ಜಗನ್ನಾಥ್ ಮುಖ್ಯ ಶಿಕ್ಷಕರು, ಸ.ಪ್ರೌ.ಶಾಲೆ ಗುರುವಾಯನ ಕೆರೆ ಭಾಗವಹಿಸಿದ್ದರು. ಶ್ರೀ ರಿಯಾಝ್ ಕೊಕ್ರಾಡಿ...
Sunday, 18 February 2018
Telecast from ANSSIRD Mysore for SSLC Students

ಆಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರು(ANSSIRD) ಇಲ್ಲಿಂದ ಪ್ರಸಾರಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾನ್ಯ ಶ್ರೀ ರವಿ ಸರ್ ನೆರವೇರಿಸಿ ವಿದ್ಯಾರ್ಥಿಗಳಿಗೆ ಅನೇಕ ಮಾಹಿತಿಗಳನ್ನು ನೀಡಿದರು.. ಮಾನ್ಯ ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಶಿವರಾಮಯ್ಯ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊಫೆಸರ್ ಶ್ರೀ ವಿಶ್ವನಾಥ ಇವರು ಮಾನಸಿಕವಾಗಿ...
Thursday, 8 February 2018
Hassan Diet with Principal Experienced a lot in Maths World

ಇಂದು ಮಾನ್ಯ ಉಪನಿರ್ದೇಶಕರು[ ಅಭಿವೃದ್ಧಿ] ಶ್ರೀ ನಾಗೇಶ್ ಸರ್ ಹಾಗೂ ಉಪನ್ಯಾಸಕರುಗಳ ತಂಡ ಹಾಸನ ಡಯಟ್ - ಇಂದು ಸರಕಾರಿ ಪ್ರೌಢಶಾಲೆ ನಡ ಇಲ್ಲಿನ ಗಣಿತ ಲೋಕ ಕ್ಕೆ ಭೇಟಿ ನೀಡಿದರು. ಮಾನ್ಯ ಉಪನಿರ್ದೇಶಕರು ಗಣಿತ ಲೋಕದ ಚಟುವಟಿಕೆಗಳ ಬಗ್ಗೆ ಅಪಾರ ಸಂತಸ ವ್ಯಕ್ತ ಪಡಿಸಿದರು. ಹಾಸನ ಡಯಟ್ ನಲ್ಲಿ ಗಣಿತ ಪ್ರಯೋಗಶಾಲೆ ರಚನೆ ಮಾಡುವ ಉದ್ದೇಶದಿಂದ ಈ ಭೇಟಿ ಮಾಡಲಾಗಿತ್ತು. ನಡ ಶಾಲೆಯ ಗಣಿತ ಲೋಕ ರಾಜ್ಯದ ಅನೇಕ ಶಾಲೆಗಳು, ಡಯಟ್ ಗಳಿಗೆ ಹಾಗೂ CTE ಗಳಲ್ಲಿ ಗಣಿತ ಪ್ರಯೋಗಶಾಲೆ ತೆರೆಯುವಂತೆ ಪ್ರೇರಣೆ ನೀಡುತ್ತಿರುವುದು ಸಂತಸ ಉಂಟುಮಾಡಿದೆ. ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ...
Tuesday, 6 February 2018
NGO Team of Karkala and Belthangady Curious to watch Maths Lab

ಇಂದು ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕುಗಳ ಶಿಕ್ಷಣ ಸಂಪನ್ಮೂಲ ಕೇಂದ್ರಗಳ[NGO] ಸದಸ್ಯರು ಮತ್ತು ಪದಾಧಿಕಾರಿಗಳು ಸರಕಾರಿ ಪ್ರೌಢಶಾಲೆ ನಡ ಇದರ ಗಣಿತ ಪ್ರಯೋಗಶಾಲೆಗೆ ಅಧ್ಯಯನ ಭೇಟಿ ನೀಡಿದರು. ಭೇಟಿಯಲ್ಲಿ ಬಹಳಷ್ಟು ಖುಷಿ ಪಟ್ಟ ಸದಸ್ಯರುಗಳು ತಮ್ಮ ಸಂತೋಷವನ್ನು ಮಾತುಗಳಲ್ಲಿ ವ್ಯಕ್ತಪಡಿಸಿದರು. ಪ್ರಯೋಗಶಾಲೆಯ ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಸ್ವಲ್ಪಮಟ್ಟಿನ ಅಡಚಣೆ ಉಂಟಾಯಿತು. ಮುಂದೆ ವೀಕ್ಷಕರಿಗೆ ವಿಸ್ತರಣೆ ಕಾರ್ಯ ಪೂರ್ಣಗೊಂಡ ನಂತರ ಅವಕಾಶ ಕಲ್ಪಿಸಲಾಗುವುದು.
...
Thursday, 1 February 2018
Innovative Teaching for SSLC Students Ended at Venur

"ಗಣಿತ ಬೋಧನೆಯಲ್ಲಿ ವಿನೂತನ ಪ್ರಯೋಗ" ಇಂದು ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇಲ್ಲಿ ಮುಕ್ತಾಯಗೊಂಡಿತು. ಶ್ರೀ ಧ.ಮ.ಅನುದಾನಿತ ಪ್ರೌಢಶಾಲೆಯ ಗಣಿತ ಅಧ್ಯಾಪಕರೂ ಹಾಗೂ ರಾಜ್ಯ ಗಣಿತ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಸದಾಶಿವ ಪೂಜಾರಿಯವರ ಯೋಜನೆ ಇದಾಗಿದ್ದು, ಇಂದಿಗೆ ನಾಲ್ಕು ಹಂತದ ಕೊನೆಯ ಪ್ರಯೋಗವು ನಡಯಿತು.ಶ್ರೀ ಸದಾಶಿವ ಪೂಜಾರಿ, ಶ್ರೀಮತಿ ವೀಣಾ ಶಾನ್ ಭಾಗ್, ಸರಕಾರಿ ಪ್ರೌಢಶಾಲೆ ಉಜಿರೆ, ಶ್ರೀ ಯಾಕೂಬ್ ಕೊಯ್ಯೂರು ಸರಕಾರಿ ಪ್ರೌಢಶಾಲೆ ನಡ ಇವರುಗಳು 10ನೇ ತರಗತಿಯ 15 ಅಧ್ಯಾಯಗಳನ್ನು ತಲಾ 5 ರಂತೆ ಹಂಚಿಕೊಂಡು ಬೆಳಿಗ್ಗೆ 9ಗಂಟೆಯಿಂದ ಸಂಜೆ...
Subscribe to:
Posts (Atom)
