ದಿನಾಂಕ 04/11/2017ರಿಂದ ಬೆಳ್ತಂಗಡಿ ಮತ್ತು ಮೂಡಬಿದ್ರಿ ವಲಯಗಳ ಗಣಿತ ಶಿಕ್ಷಕರಿಗೆ 5 ದಿನಗಳ ತರಬೇತಿಯು ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿ ಇಲ್ಲಿ ಆರಂಭಗೊಂಡಿತು. ತರಬೇತಿಯನ್ನು ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಲೀನಾ ಡಿ ಸೋಜಾ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿಕ್ಷಣ ಸಂಯೋಜಕ ಶ್ರೀ ರಮೇಶ್ ರವರು ವಹಿಸಿದ್ದರು. ತರಬೇತಿಯಲ್ಲಿ ಶ್ರೀ ಸದಾಶಿವ ಪೂಜಾರಿ, ಶ್ರೀ ಶರತ್ ಕುಮಾರ್, ಶ್ರೀ ಯಾಕೂಬ್ ಕೊಯ್ಯೂರು, ಶ್ರೀಮತಿ ವೀಣಾ ಶಾನ್ ಭಾಗ್, ಶ್ರೀ ಪುರುಷೋತ್ತಮ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿರುವರು. ತರಬೇತಿಯಲ್ಲಿ 65 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.
Hi,v good
ReplyDelete